ಕೇಸ್ ಆಫ್ ಕಮಲಾಪುರ ಎಸ್ಟೇಟ್

Author : ಕೌಶಿಕ್ ಕೂಡುರಸ್ತೆ

Pages 180

₹ 200.00




Year of Publication: 2023
Published by: ಸ್ನೇಹ ಬುಕ್ ಹೌಸ್
Address: ಬೆಂಗಳೂರು

Synopsys

‘ಕೇಸ್ ಆಫ್ ಕಮಲಾಪುರ ಎಸ್ಟೇಟ್’ ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಮಂಗಳೂರಿನ ಪ್ರಭಾಕರ್ ಶೆಟ್ಟಿಯು ತನ್ನೊಟ್ಟಿಗೆ ತಂದಿದ್ದ ತಿಮಿಂಗಿಲ ವಾಂತಿಯಿರುವ ಬ್ಯಾಗು ಕಮಲಾಪುರ ಎಸ್ಟೇಟ್ ನಲ್ಲಿ ಕಳೆದು ಹೋಗುತ್ತದೆ. ಆ ಎಸ್ಟೇಟಿನ ಮಾಲೀಕರಾದ ಕಾಳಿದಾಸ್ ಅರಸರ ಮನೆಯವರು ಈ ಮಾಲನ್ನು ಕದ್ದಿದ್ದಾರೆಂಬ ಅನುಮಾನ ವ್ಯಕ್ತಪಡಿಸಿ, ಈ ಕೇಸನ್ನು ಡಿಟೆಕ್ಟಿವ್ ಹಿಮವಂತನಿಗೆ ಶೆಟ್ಟಿಯು ಒಪ್ಪಿಸುತ್ತಾನೆ. ಈ ಕುರಿತಾಗಿ ನಡೆಯುವ ರೋಚಕ ಕತೆಯೇ "ಕೇಸ್ ಆಫ್ ಕಮಲಾಪುರ ಎಸ್ಟೇಟ್"

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books